ಬಣ್ಣದ ತೆವಲು - COLOR "BLIND"NESS...



ಟೈಟಲ್ಲೇ ಭಯಾನಕ ಹಾರ್ಷಾಗಿದೆ ಅಲ್ವೆ? ಏನ್ ಮಾಡೊದು !! ಯಾವನ್ ಜಗತ್ತೇ ಸರಿಯಿಲ್ಲ ಅಂತ ಬೈತಾ ಇರ್ತಾನೋ, ಅವ್ನು ತುಂಬಾ ದೊಡ್ಡವನು ಅಂತ ಅನ್ಸ್ಕೊತಾನಂತೆ. ನಾನು ದೊಡ್ ಮನುಷ್ಯ ಆಗ್ಬೇಕು ಅಂತಾನೇ ಈ ಟೈಟಲ್ ಇಟ್ಟಿರೋದು.

ಭ್ರಷ್ಟಾಚಾರದ ವಿರುದ್ಧ ನಡೆದ ಅಣ್ಣಾ ಆಂದೋಲನದಲ್ಲಿ, ನಮ್ಮ ದೇಶದ ಯೂತ್ ಪವರ್ ವರ್ಕ್ ಆಗಿದೆ ಅನ್ನೋದು ಎಲ್ಲರೂ ಒಪ್ಪುವ ವಿಷಯ. ಆದ್ರೆ ಇಷ್ಟ್ ದಿನ, ಅಂದ್ರೆ ಐ ಮೀನ್ ಅಣ್ಣಾ ಬರೋ ತನಕ ನಮ್ಮ ದೇಶದ ಯೂತ್ ಗೆ,ಏನ್ ಯೌವ್ವನ ಮೈಗೆ ಹತ್ತಿರ್ಲಿಲ್ಲ್ವಾ? ಹತ್ತಿತ್ತೋ, ಬತ್ತಿತ್ತೋ ಅವೆಲ್ಲಾ ಗೊತ್ತಿಲ್ಲ.. ಅಣ್ಣಾ ಮತ್ತು ದೇಶದ ಮಧ್ಯೆ ಇದ್ದ, ಭ್ರಷ್ಟಾಚಾರದ ವಿರುದ್ಧ ಕೂಗುವ ಸಮಾನ ಮನಸ್ಕತೆ ನಮ್ಮನ್ನು ಇವತ್ತು ಇಲಿಗೆ ತಂದ್ ನಿಲ್ಸಿದೆ.


OK. ಮತ್ತೆ, ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು ಕಣ್ರಪ್ಪ. ಏನ್ ಹಬ್ಬದ ಆದ್ಮೆಲೆ ವಿಷ್ ಮಾಡ್ತಾ ಇದಾನೆ ಅಂತ ಬೈಕೊಬೇಡಿ. I JUST WANTED TO SPEAK SOMETHING ABOUT THIS AND THUS USED THE STRATEGY OF WISHING YOU ALL. ಸ್ವಲ್ಪ ಕನ್ನಿಂಗ್ ನಾನು. OK, ತಲಾಹರಟೆಗಳನೆಲ್ಲಾ ಬದಿಗಿಟ್ಟು, ಟಾಪಿಕ್ ಗೆ ಬರೋಣ. ಬಾಲ್ ಗಂಗಾಧರ ತಿಲಕರು ಮಹತ್ತರ ಉದ್ದೇಶದಿಂದ ರೋಡ್ ರೋಡಲ್ಲೂ ಗಣಪನ್ನ ಪೂಜಿಸಿ ಅಂಥ್ಹೇಳಿದ್ರು. ಎಲ್ರೂ ಕೈ ಜೋಡ್ಸಿದ್ರು, ತಿಲಕರು ದೊಡ್ಡೋವ್ರಾದ್ರು. ಇವತ್ತಿಗೂ ಅವ್ರ ಹೆಸ್ರು ಉಳ್ಸೋಹಂಗೆ ನಮ್ ಜನ ಅದನ್ನ ನಡ್ಸ್ಕೊಂಡ್ ಬರ್ತಾ ಇದಾರೆ.

ಪ್ರಾಬ್ಲಮ್ ಇರೋದು ಇಲ್ಲೇ !!
ನಮ್ಗಳಿಗೆ ಅದೇನ್ ಅರ್ಥ ಆಗಲ್ವೋ ಎನೋಪ್ಪ.. ಎಲ್ಲಿ ನೊಡಿದ್ರೂ, ಬಣ್ಣದ ಗಣಪತಿ ವಿಗ್ರಹಗಳದ್ದೇ ಕಾರುಬಾರು. ಸುಮ್ನೆ ವಿಜಯ ಕರ್ನಾಟಕದಲ್ಲಿ ಬಂದ ಈ STATISTICS ಮೇಲೆ ಕಣ್ಣು ಹಾಯಿಸಿ. ಮೀಟ್ರು ಆಫ್ ಆಗತ್ತೆ.

"ರಾಜ್ಯದಲ್ಲಿ ಈ ಬಾರಿ 50 ರಿಂದ 70 ಲಕ್ಷ ಗಣಪನ ಮೂರ್ತಿಗಳು ನೀರಿನಲ್ಲಿ ಕರಗಲಿವೆ. ಇದರಲ್ಲಿ ಶೇ.80 ರಷ್ಟು ಬಣ್ಣದ ಗಣೇಶನದ್ದೇ ದರ್ಬಾರು. ಇದರಿಂದ 3 ಸಾವಿರಕ್ಕು ಹೆಚ್ಚು ಕೆರೆಗಳು ಮಲಿನಗೊಳ್ಳಲಿವೆ. ಸೇಂಟ್ ಜಾನ್ಸ್ ಆಸ್ಪತ್ರೆಯ ಡಾ.ವೆಂಕಟೇಶ್ ಅವರ ಪ್ರಕಾರ, ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಮೂತ್ರಪಿಂಡ ವೈಫಲ್ಯ, ಕರುಳು ಬೇನೆ, ಕ್ಯಾನ್ಸರ್, ಮೆದುಳು ರೋಗಗಳಿಗೆ ತುತ್ತಾಗಿದ್ದರೆ! 8 ವರ್ಷದೊಳಗಿನ ಚಿಣ್ಣರ ದೇಹಕ್ಕೆ ವಿಷ ಸೇರುತ್ತವೆ. "

ಇದನ್ನ ಓದಿದ್ಮೇಲೂ ನಾವ್ ಬಣ್ಣದ ಗಣಪನನ್ನೇ ತಂದು ಕೂರಸ್ತೀವಿ ಅಂದ್ರೆ, ನಮಗಿಂತ ದೊಡ್ಡ ದೇಶಭ್ರಷ್ಟರು, ಇದಕ್ಕಿಂತ ದೊಡ್ಡ್ SCAM ಯಾವ್ದೂ ಇಲ್ಲ ಬಿಡಿ. ಇನ್ ಕೆಲವರು," ಅಯ್ಯೋ ನಾವ್ ಬಕೀಟಲ್ಲೇ ಮುಳ್ಗುಸ್ಬಿಡ್ತೀವಿ. ನಾವ್ ಕೆರೆ ತಮ ಓಗದೇ ಇಲ್ಲ ಅಂತ ಸಮಜಾಯಿಷಿ ಕೊಡ್ತಾರೆ ". ಅದಕ್ಕೆ ನನ್ನ ಉತ್ತರ - "ವಿಗ್ರಹ ಕರಗಿದ ನೀರನ್ನು, ನಾವ್ ಹಾಕೋದು ಪಾಪ ಕಲ್ಪವೃಕ್ಷ ಎನಿಸಿಕೊಂಡ ತೆಂಗಿನ ಮರಕ್ಕೇ ಹೊರತು, ಮೋರಿಗಲ್ಲ. ನಮ್ ಜನಗಳಿಗೆ ವಿಗ್ರಹ ಕರಗಿಸಿದ ನೀರನ್ನ ಚರಂಡಿಗೆ ಹಾಕೊ ಧೈರ್ಯ ಎಲ್ಲಿಂದ ಬರತ್ತೆ ಬಿಡಿ (ನಮ್ ದೇಶದಲ್ಲಿ ಭಕ್ತಿಗಿಂತ, ಭಯ ಜಾಸ್ತಿ ಅಲ್ವೇ!! ). ತೆಂಗಿನ ಮರಕ್ಕೊ, ಏರಿಯಾದಲ್ಲಿರುವ ಅರಳಿ ಮರಕ್ಕೋ ಹಾಕ್ತೀವಿ. GROUND WATERನ ರೇಪ್ ಮಾಡ್ತೀವಿ( I MEAN ಕೆಡ್ಸ್ತೀವಿ. I WANTED TO USE A HARSH WORD - EXCUSE ME ).

ಇನ್ನು ನಮ್ ದೇಶಕ್ಕೆ LOKPAL BILL ದೊರಕಿಸಿಕೊಟ್ಟ ಯುವಜನತೆ, ಅವ್ರ್ಗಳ ಮನೆಯಲ್ಲಿ, ಕಾಲೋನಿಗಳಲ್ಲಿ ಮಣ್ಣಿನ ಗಣಪನನ್ನೇ ತರುವಂತೆ ಆ ವಿಘ್ನನಿವಾರಕನೇ ಬುದ್ಧಿ ಕೊಡ್ಲಿ. ಆ ಗಟ್ಟಿ ಬಣ್ ಬಣ್ಣದ್ ಗಣಪತಿಗಳನ್ನ ನೋಡ್ಬೆಕಾದ್ರೆ ಭಕ್ತಿನೇ ಬರಲ್ಲ, WHEN WE THINK OF THE AFTER EFFECTS. IT SHOULD NO HAPPEN LIKE THAT ಅಲ್ವಾ?? LETS BE MORE RESPONSIBLE AND SENSIBLE.

ಗಣೇಶ ಎಂಥ ಅದ್ಭುತ ಕ್ಯಾರೆಕ್ಟರ್ ಅಂದ್ರೆ, ಅವನ್ ತಾಯಿಗೆ ಪ್ರಸವ ವೇದನೆ ಕೊಡ್ಬಾರ್ದು ಅಂತ, ಪಾರ್ವತಿಯ ಬೆವರಿನಿಂದ ಜನಿಸಿದ ಮಹಾನುಭಾವ. ಅಂಥವನನ್ನ ನಾವು ಪೂಜೆ ನೆಪದಲ್ಲಿ ಪ್ರಕೃತಿ ಮಾತೆಗೆ ನೋವು ಕೊಡ್ತಾಯಿದ್ದೀವಿ. ಇದು ಎಷ್ಟರ ಮಟ್ಟಿಗೆ ಸರಿ !!

ಇನ್ನೂ ಬರಿತಾ ಹೋದರೆ ಪೇಜ್ ಗಟ್ಟಲೇ ಗೀಚಬಹುದು.

ಅಥವಾ ಒಂದು ಲೈನಲ್ಲೇ ಹೇಳ್ಬಹುದು ಅನ್ನೋದಾದ್ರೆ
-LET THE CELEBRATIONS BE COLORFUL.
NOT THE IDOL !!