ಡಬ್ಬಾ ಬರಹಗಳು

2011 ರ ಕೆಲವು ಕುತೂಹಲಕಾರಿ , ಹಾಸ್ಯ ಮಿಶ್ರಿತ , ವಿಡಂಬನಾತ್ಮಕ ಮತ್ತು ಕೆಲವು ಡಬ್ಬಾ FACEBOOK ಸ್ಟೇಟಸ್ ಗಳನ್ನು ಇಲ್ಲಿ ಸಂಗ್ರಹಿಸಿದ್ದೇನೆ.


CINEMA :

ಪರಮಾತ್ಮನ ಬಗ್ಗೆ -
Paramathma - watched twice in three days.. Bhat sir know how to narrate a cinema.. Sad to see it getting mixed reviews.. kannada audience have to upgrade ASAP :)

ಜೋಗಯ್ಯ ನ ಹೈಪ್ ಗೆ ನಾನು ಮೋಸ ಹೋಗಿದ್ದೆ -
Jogayya - Has boss prem kept up to the Hype ?? Lets wait till aug 12th !!

ರಾಜ್ ಮೊಮ್ಮಗ -
watched HUDUGRU.. one quick observation - looks like raghavendra rajkumar's son has acted, just a guess, its not officially told, but i saw him in few of the scenes(no dialogues though ).. See how a big banner grooms an actor

ಸಿದ್ಲಿಂಗು ಪೋಸ್ಟರ್ ಗೆ ನಾನು ಮಕಾರ್ -
"Hesru Asaadulla beg, mane devru kaTeelu durgaparameshwari.. "
saw it on a new kannada movie poster..
One of the most vibrant posters for me :)
..
Movie name and caption is more stunning..
SIDDLINGU- rohini nakshatra vrishabha raashi !!


 
ಸಂಜು weds  ಗೀತ ನೋಡಿ ನನಗನ್ನಿಸಿದ್ದು -
yen goLu guru!!!

 ತಾಜಾ ಹಾಡು -
Thaaja Thaaja kanasugaLu.. Aaja Aaja yennutive.. This song from 'GUN' is driving me crazy for this week :)

ಒಲವೇ ಮಂದಾರ ! ಈ ಚಿತ್ರವನ್ನ ಗಣೇಶ್ - ಗಿಣೇಶ್ ಮಾಡಿದ್ರೆ ಗ್ಯಾರಂಟಿ ಸೂಪರ್ ಹಿಟ್-
Olave mandaara- If u have never heard anything like this, FYI- This is a new kannada movie from new comers.By chance i watched the movie.. Never regretted for watching..
One super love story :) hats off to the screenplay :)
I'm not the producer of this film, but still cant resist saying 'PLEASE watch'
.


CRICKET :

Before world cup :
EDEN GARDENS is not ready for WORLD CUP.. who cares..
My FB status for world cup is ready..
COMING SOON :)


ದೊಡ್ಡವರ ಬಗ್ಗೆ ಸಣ್ಣವನು ಬರೆದಿದ್ದು-
When Sachin is playing every moment is a celebration.. And mind it,this might be the end of Festive season. Eyes wide open to witness all cherishing moments of THE SACHIN ERA :(

There are only 2 kinds of people in India... SACHIN FANS and SACHIN CRITIQUES.. !!

ಎತ್ತಣಿನ್ದೆತ್ತ ಸಂಬಂಧ-
Cricket world cup 2011.. Hope Bangalore traffic gets less atleast during match days.
Heights!! but.. decent enough logic..

Believe it or not ! I had written this before match day and this really happened-

This weekend dhamaka- INDIA vs IRELAND.. another nail biting Finish :P

My favorite one -
MOHALI is very near to pakistan to packup and reach home :)

Cricket Love -
I bleed Safforn, White, Green with a tinge of Blue :)

For IND vs PAK semifinal-
This WEDNESDAY is one of those days where 'nim ajji', 'nam ajji', 'nim amma', 'nam amma' 'nim girl friends' pose lot of questions about new rules of cricket like powerplays, freehits, reviews... :)
cos they might have stopped watching cricket for long time..just enjaay the questions :)


This one was too good -
‎1983- Champions
1987- (1987-1983=4) among top 4
1992- (1992-1983=9) knocked out
1996- (1996-1983=13=1+3= 4) among top 4
1999- (1999-1983=16=1+6=7) knocked out
... 2003- (2003-1983=20=2+0=2) Runners
2007- (2007-1983=14=1+4=5) knocked out
2011- (2011-1983=28=2+8=10=1+0= 1) "Champions"
-----------------------------------------------
"HENGE" ??? :) :)


IPL betting -
Thankgod IPL is getting over !!  ಇನ್ಮೇಲ್ ದುಡ್ದಿದ್ದೆಲ್ಲಾ ಮಟ ಸೇರಲ್ಲ, ಮನೆ ಸೇರತ್ತೆ :)

When Dravid was fighting in England, CONTROVERSIAL-
In our KAASHI, there are lot of WALLS built out of cruelty !! Presently, in CRICKET KAASHI, there is only ONE WALL who has guts to face the bowling which had BRUTALITY !!


When sehwag scored the double-
Aristotle himself would have said, had he been a cricket fan, “If you are going to be hammered in a cricket match, better to be hammered with a bit of history.”
~ Andy Zaltzman



POLITICS:


People who Impressed / Depressed me-

Santhosh Hegde levellu guru :) MaLe beLe aagta irodu inthaavrindale :) Sir, Thank you very much !!

aNNa hazare- kooLe manshya :)

aNNa had an idea.. media did the miracle !!

aNNavrge thale nov baralva upvaasa maaDdaga??? !!

Thanks Yeddy sir... Finally 'it' happened.. But i wish all this drama would continue for ever. Cos for the past 4 days there were no thefts, no murders, no scams, no chain snatching, no road accidents.. i never heard any such news in our media.. all thanks to you :)


ಪುಸ್ತಕ ಪ್ರೀತಿ-

Reading 'Abachoorina Post Aapeesu'-- A 'masterpiece'u :)

MAHAA PALAAYANA- One gem of a book :)

yentha narsattongu kicchu hattiso pustaka - AJEYA

If yograj bhat had read S.L Bhyrappa's Saraswathi Samman Award winning MANDRA, i bet he wouldn't have written the below line..
ಮ್ಯೂಸಿಕ್ಕೇ ಸರಿಯಿಲ್ಲ ಏಳೇ ಸ್ವರ.. ಇನ್ನೆಷ್ಟು ಕೂಗೋದು ಎಮ್ಮೆ ಥರಾ...!!


 
'Matadaana' - post election part is finely sketched by bhyrappa sir.. so realistic !! Eager to watch the movie..

'kavalu' - Finished reading it in record time !! saadhyavaadre odi.. ee modle odidre nim abhipraaya tilisi :)

JUGAARI CROSS - Every next line to be read, makes you to keep your FINGERS CROSSED !!

If you want to know who is SL BHYRAPPA, he's a kannada novelist..
If you want to know what is SL BHYRAPPA, read his 'daaTu' :)
Dont know kannada? dont worry.. its in all 14 INDIAN Languages including ENGLISH :) !!


MISCELLANEOUS -


This time our topic in office- CRICKET TOURNAMENT this weekend :)

Feb 14th-BhajrangdaL all set !!! Too Dangerous to get westernised, folks :)

When bomb blasted in Delhi-
boLimaklu !! blast maaDdoru..

One gem-
ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು |
ಮಗುವು ಪೆತ್ತರ್ಗೆ ನೀಂ , ಲೋಕಕೆ ಸ್ಪರ್ಧಿ ||
ಹೆಗಳಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ |
ರಗಳೆಗಾರಿಗೆ ಬಿಡುವೊ ? - ಮಂಕುತಿಮ್ಮ ||
~ ಡಿವಿಜಿ


GREAT minds discuss ideas..
Lesser ones discuss events..
Low class discuss PEOPLE.. !!
~ unknown


China, I hate it -
The concept of "NANDELLIDLI" is born and brought up in china !! Be it milk, bicycle, electronics, rice, textile, plastic, pens, sport (now cricket), corporate (now into IT competing wit INDIA) etc etc..

Tiger population is not at all growing in INDIA as Tigers do not have the eligibility to vote
~ unknown


Life is what happens to you while you are busy making other plans
~ John Lennon


Confirmation of death penalty awarded to Pakistani terrorist Ajmal Kasab.. F**k, he still can go to supreme court.. Common man of India can never understand the sensitivity of INDIAN LAW


MY SPEAKING KISSES (ನನ್ನ ನುಡಿಮುತ್ತುಗಳು)-


My Heart says Go with my Mind !!


 

Being active is not on facebook !!

This is something demoralising/inspiring..
If u get placed in college, then your way is only one way..
If u do not get, then it is all your way :)


celebrate on friday bcos its saturday, sunday.. cry on staurday, sunday for monday.. !!


When you see the platform on both the sides of a train, you are bound to get confused which way to get down !!

THOSE WERE THE DAYS" antha korgo badlu, "THESE ARE THE DAYS" antha meryodu uttama :) !!


Alwayz make it LARGE or go for SMALL.. intermediates are unnoticed..
coz world always recognises EXTREMITIES !! .. !!


On the eve of new year -
Everyone says they have some SOLID plans for tonight.. But most of them make it liquid !!

We wont mind INDIAN girls 'smoking hot'.. but we mind girls 'smoking'..
I cannot just see that.. kachada gu equality beka??


PINK is hot coz its close to the color of SKIN..
~ hoge boyz

"somvaarada somaarithana" = "MOnday BlueZ"

life bhayaanaka kooLe :)

People say Bangalore never sleeps.. then how the hell is the population so high !!


Bengaluru (divas + diwali pollution + usual traffic pollution ) = bengaluru dEEvaaLi !!


Let celebrations be colorful.. not the idol :)

I am pure vegeterian-
K.....fcKfcKfcKfcKfcKfcKfcKfcKfcKfcK....!!

why the hell you go for boy babies.. let the future babes take birth :)
~ world population day spl !!! - women empowerment in hoge Boyz style ..


AB to be soon grandfather..
AB- I am very very Happy..
Abhishek - NO IDEA .. ;)
~ manassu bhyanaka kooLe


 
Ppl having long distance relationship alwayz rely on 3G, 4G, voice msging, video calling etc etc.. Lovers close by only worry about (their) 2G (second generation)
~ manassu bhayanaka kooLe ;)

If you still love your girl friend, then you are committed, if you start loving others, then you must be 'bargett'ed !! :)

JAW - just another weekned
__________________________________________________
And When I found nothing and just Blank, I still uploaded one.. i.e
NO NEW STA"TUSS"ssss...

ಮತ್ತೆ ಸಿಗೋಣ :)
~ ಶಶಾಂಕ

ಶಾಲಭಂಜಿಕೆ ಎಂಬ ಮನಃರಂಜಿಕೆ

ನಾನು ಈ ಹಿಂದೆ ಸಾಕಷ್ಟು ಕನ್ನಡ ಪುಸ್ತಕಗಳನ್ನು ಓದಿದ್ದರೂ, ಅದರ ಬಗ್ಗೆ ಬರೀಬೇಕು ಅಂತ ಅನ್ನಿಸಿರಲಿಲ್ಲ. Of course, ಭೈರಪ್ಪ, ಅನಂತಮೂರ್ತಿ, ಕಾರಂತ, ತೇಜಸ್ವಿ ಮೊದಲಾದವರ ಸಾಹಿತ್ಯದ ಬಗ್ಗೆ ನಾನೇನ್ ಹೇಳೋದಿರತ್ತೆ.  ಪುಸ್ತಕ ಪ್ರೇಮಿಗಳು ಮುಗಿಬಿದ್ದು ಓದ್ತಾರೆ.

ಆದರೆ ಇಲ್ಲೊಂದು ಪುಸ್ತಕದ ಬಗ್ಗೆ ನಾನು ಹೇಳಲೇಬೇಕು. ಅದು ಛಂದ  ಪುಸ್ತಕ ಪ್ರಕಟಿಸಿರುವ ಶಾಲಭಂಜಿಕೆ ಎಂಬ ಮೈನವಿರೇಳಿಸುವ ಕಥಾ ಸಂಕಲನ. ಇತಿಹಾಸ ಮತ್ತು ವಿಜ್ಞಾನದ ಅಜ್ಞಾತ ಸತ್ಯಗಳ ಅಡಿಗಟ್ಟಿನಲ್ಲಿ ಹೆಣೆಯಲಾದ ಕಥೆಗಳು ರೋಚಕ ಎನಿಸುವ ರೀತಿಯಲ್ಲಿ ಬರೆದಿದ್ದಾರೆ, ಲೇಖಕರಾದ ಡಾ. ಕೆ ಎನ್ ಗಣೇಶಯ್ಯ ನವರು. ಇವರು ಮೂಲತಃ ಜೀವ ಶಾಸ್ತ್ರ ವಿಜ್ಞಾನಿ ಎಂಬುದು ಸೋಜಿಗದ ಸಂಗತಿ.

ಶಾಲಭಂಜಿಕೆ ಎಂಬ ಶಿಲಾಬಾಲಿಕೆ 'ಮೋನಲಿಸ 'ಳಿಗೇ ಸಡ್ಡು ಹೊಡೆಯುವಷ್ಟು ಸುಂದರವಾಗಿದ್ದಳು. ಅ ಶಿಲಾಬಾಲಿಕೆಯನ್ನು ನಿರ್ಮಿಸಿದವ ಕೊಲೆಯಾದ ಕಥೆ, ಅದರ ಹಿಂದಿನ ಮರ್ಮ, ಕರ್ಮಗಳೆಲ್ಲವೂ ಕಥಾ ಸಂಕಲನದ ಮೊದಲ ಕಥೆಯಾದ 'ಶಾಲಭಂಜಿಕೆ' ಹೇಳುತ್ತದೆ. ಈ ಕಥೆಯನ್ನು ಓದಿದ ನಂತರ ನಿಮಗೆ ನನ್ನಂತೆಯೇ ಆ ಶಾಲಭಂಜಿಕೆಯನ್ನು ಜೀವನದಲ್ಲಿ ಒಮ್ಮೆ ನೋಡಬೇಕೆನ್ನಿಸದಿದ್ದರೆ ಕೇಳಿ. ಇಂದಿಗೂ ಅದು ಗ್ವಾಲಿಯರ್ ನಲ್ಲಿದೆಯಂತೆ.


ಹೀಗೆಯೇ ಪುಸ್ತಕದ ಪ್ರತಿಯೊಂದು ಕಥೆಯೂ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಅದೇ ಲೇಖಕರ ಶಕ್ತಿ. 'ಸೋಮನಾಥಪುರದ ವಿಷ್ಣು   ವಿಗ್ರಹ', 'ಬಿಳಿಗಿರಿ ರಂಗ ಬೆಟ್ಟದ ಜೇನುಗಳು'  ಬಗ್ಗೆಯ ಕಥೆಗಳು ನನಗೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಅಂದ್ರೆ ಸಿಕ್ಕ ಸಿಕ್ಕವರಿಗೆಲ್ಲ ಅದರ ಬಗ್ಗೆಯೇ ಕೊರಿತಾಯ್ದ್ದೆ. ಕೆಲವು ಕಥೆಗಳನ್ನು ಹೆಣೆದಿರುವ ಶೈಲಿ ಏಕತಾನತೆ ಇಂದ ಕೂಡಿದ್ದರೂ, ಕಥಾವಸ್ತು ಮಾತ್ರ ಅತ್ಯಾಕರ್ಷಕ ಹಾಗು ಅತ್ಯಂತ ನವ್ಯ.

ಕನ್ನಡ ಸಾಹಿತ್ಯಕ್ಕೇ ಹೊಸ ಆಯಾಮ ಕೊಟ್ಟಿರುವ ಇಂತಹ ಪುಸ್ತಕಗಳು ಮತ್ತಷ್ಟು ಬರಲಿ ಎಂಬುದೇ ನನ್ನ ಆಶಯ.
ಉಪಯುಕ್ತ ಮಾಹಿತಿ:
ಪುಸ್ತಕದ ಹೆಸರು: ಶಾಲಭಂಜಿಕೆ
ಪ್ರಕಟಣೆ: ಛಂದ ಪುಸ್ತಕ
ದರ: ೮೦ ರೂಗಳು
ಪ್ರತಿಗಳು: ಸಪ್ನಾ ಬುಕ್ ಹೌಸಲ್ಲಿ ಲಭ್ಯ

ಕಾಸ್ ಕೊಟ್ಟು ಕನ್ನಡ ಪುಸ್ತಕ ಓದಿ!!
" ನೀನ್ ತಗಂಡಿದ್ಯಲ್ಲ ನಿಂದೇ ಒಸಿ ಕೊಡಪ್ಪ ಓದ್ಕೊಡ್ತಿವಿ "  ಅಂತ ಕೆಲವರು ನನ್ನ ಕೇಳಬಹುದು.
" ಸಾರಿ ಸರ್, ನೀವು ಕ್ಯೂನಲ್ಲಿದ್ದೀರಿ, ದಯವಿಟ್ಟು ನಿರೀಕ್ಷಿಸಿ "

೨೦೧೧ರ ಕೊನೆಯ ಬರವಣಿಗೆ.  ೨೦೧೨ ರಲ್ಲಿ ಸಿಗೋಣ ಗೆಳೆಯರೇ. 

~ ಶಶಾಂಕ  

PLASTIC PROBLEMS

ಕಾಲೇಜಲ್ಲಿದ್ದಾಗ ಬರೆದಿಟ್ಟುಕೊಂಟಿದ್ದ ಒಂದು ಹಾಳೆ ಕೈಗೆ ಸಿಕ್ಕಿತು. ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ನ್ಲಿ ನಡೆದ 'ONE LINER" ಕಾಂಪಿಟೇಷನ್ಗಾಗಿ ನಾನು ಮತ್ತು ನನ್ನ ಗೆಳೆಯ ಹರ್ಷಲ್ ಕೆಲವು ONE LINER ಗಳನ್ನು ಸೃಷ್ಟಿಸಿದ್ವಿ. ಸ್ಪರ್ಧೆಯ ಥೀಮ್ "NO PASTICS" ಆಗಿತ್ತು. ಬರೆದ ಹತ್ತು ಹನ್ನೊಂದು ಒನ್ ಲೈನರ್ಗಳನ್ನು ಸಬ್ಮಿಟ್ ಮಾಡಿದ್ವಿ. ಅಲ್ಲಿ ಹೇಗೆ ಕೊಟ್ಟಿದ್ವೋ, ಹಾಗೆಯೆ ಇದನ್ನು ಈ ಕೆಳಗೆ ನಿಮ್ಮ ಮುಂದಿಟ್ಟೇದೇನೆ.

ಓದಿ, ಮನಸ್ಸಾದ್ರೆ (ತಾಕತ್ತಿದ್ದರೆ !!) ಪ್ಲ್ಯಾಸ್ಟಿಕ್ ಬಳಕೆ ಕಮ್ಮಿ ಮಾಡಿ !!
ಪ್ರಥಮ ಬಹುಮಾನ ಗೆದ್ದ ಈ ಸಂಗ್ರಹ ಈಗ ಸಾರ್ವಜನಿಕವಾಗುತ್ತಿದೆ. ಸ್ಪರ್ಧೆಯಲ್ಲಿ ಎಷ್ಟ್ ಜನ ಭಾಗವಹಿಸಿದ್ರು ಅಂತ ಮಾತ್ರ ಕೇಳ್ಬೇಡಿ !!
  • Who told death is in the hands of God, its just 50p in market.

  • Plastics play a major role in our life, ofcourse it does play with our life.

  • Today, ' life without plastic ' is a dream. If this prevails,     ' life ' would be a dream, tomorrow.

  • Mother earth is busy in research work for the enzyme 'plasticase'.

  • We can't bury it, we can't burn it, then? Just forget it  !!

  • Fifty percent of the world is PLASTIC FREE, but the other half is "FREE TO PLASTIC".

  • The most ironical phrase the world has ever seen is the one here - NO PLASTIC ZONE.

  • I strictly said 'NO' to plastics, but they just do not seem to listen.

  • Plastics act like as if they are the Genetic Materials of Destruction.

  • Remember the VTU laminated marks card which we used to get for each semester ?? I could not digest the marks, Mother Earth can not digest the card.

  • Cycling keeps us healthy, recylcing keeps us ALIVE --> The Prize winning one.

ಲೇಡೀಸ್ ಪ್ರಾಬ್ಲಮ್ಮು - ಅಣಕ ಹಾಡು


ಯಾರಿಗ್ ಹೇಳಣಾ ನಮ್ಮ ಪ್ರಾಬ್ಲಮ್ಮು |
ಹುಡುಗೀರ ಗೋಳಿಗೆ ಇಲ್ಲ ಮುಲಾಮು ||

ಪ್ರತಿಯೊಬ್ಬ ಹೆಣ್ ಮಗ್ಳೀಗೂ ಇರ್ತಾನೊಬ್ ಗಂಡ್ಸು
ಅವ್ನ್ ಸಾಚ ಆಗಿರೋದು ನಿಮ್ ಲಕ್ ಡಿಪೆಂಡ್ಸು
ಎಲ್ಲೇ ಇದ್ರೂನು ನೀವ್, ಹೆಂಗೇ ಇದ್ರೂನು ನೀವ್
ಲೇಡೀಸ್ ಅಂದ್ರೆ ಜೊಲ್ ಸುರ್ಸೊ ಜೆಂಟಲ್ ಮೆನ್ಸು
ಹುಡ್ಗೀರ್ನ ಕಣ್ಣಲ್ಲೇ ಅಳೆಯೋ ರೀಟೇಲ್ ಮರ್ಚೆಂಟ್ಸು..

ಥೂ.. ಯಾರಿಗ್ ಹೇಳಣಾ ನಮ್ಮ ಪ್ರಾಬ್ಲಮ್ಮು |
ಹುಡುಗೀರ ಗೋಳಿಗೆ ಇಲ್ಲ ಮುಲಾಮು ||

ಯೂನಿಫಾರ್ಮ್ ಲಿ ಮುದ್ ಮುದ್ದಾಗಿ ಕಾಣ್ಸ್ತಿದ್ದೆ ನಾನು, ಸ್ಕೂಲ್ನಲ್ಲಿದ್ದಾಗ
ಲಾಸ್ಟ್ ಬೆಂಚಲ್ಲಿ ಕೂತ್ಕೊಂಡು ತುಂಬಾ ಸೌಂಡ್ ಮಾಡ್ತಾ ಇದ್ದ, ಅವ್ನ್ ಹೆಸರು ನಾಗ
ಯಾವ್ನೊ ಒಬ್ಬ ಕೆಮ್ದಂಗಾಯ್ತು, ಹಿಂದಕ್ಕ್ ತಿರುಗಿ ನೋಡೇಬಿಟ್ಟೆ
ನಾಗ ನನ್ನ ನೋಡ್ತಾ ಇದ್ದ, ಘುರಾಯ್ಸ್ತಾದ್ದ ಸಿಕ್ಕಾಬಟ್ಟೆ..

ವಯಸೀಗೆ ಬರುವ ಮುನ್ನವೇ, ಕಾಳು ಹಾಕ್ಸ್ಕೊಳೋ ಹಕ್ಕಿ ಆಗ್ಬಿಟ್ಟೆ
ಅಷ್ಟು ಬೇಗ ಎಷ್ಟೋ ಹುಡುಗರ ಭಗ್ನ ಪ್ರೇಮಕೆ ಕಾರಣವಾಗ್ಬಿಟ್ಟೆ..


ಯಾರಿಗ್ ಹೇಳಣಾ ನಮ್ಮ ಪ್ರಾಬ್ಲಮ್ಸು |
ಊರಿಗ್ ಮುಂಚೆ ಬೆನ್ನಿಗಂಟೊ ಇಲ್ಲದ್ ಅಫೇರ್ಸು ||

 ~ ಒಂದು ಹೆಣ್ಣಿನಂತೆ ಯೋಚಿಸಿ ಬರೆದದ್ದು. ಜನಪ್ರಿಯವಾದರೆ ಮುಂದ್ವರೆಸ್ತೀನಿ. ಇಲ್ದಿದ್ರೆ ಬ್ಲಾಗು ಇಷ್ಟೇನೆ !!!

ಓಂ - LATEST

THIS COULD GO TO LIMCA OR GUINNESS FOR THE TIME AT WHICH I AM REVIEWING A MOVIE.. !! i.e 16 years after the movie's release

ಅದೇನೊ ಗಾದೆ ಹೇಳ್ದಂಗಾಯ್ತು ಈಗ ನಾನು ಮಾಡ್ತಾಯ್ರೊ ಕೆಲ್ಸ. ಏನಪ್ಪ ಅಂದ್ರೆ, ಓಂ ಚಿತ್ರದ ವಿಮರ್ಶೆ. ಚಿತ್ರ ರಿಲೀಸಾಗಿ ಹದಿನಾರು ವರ್ಷವಾದರೂ, ಈಗ್ಲೂ ಥಿಯೇಟರಲ್ಲಿ ಹಾಕ್ದಾಗ ಥಿಯೇಟರ್ ಓನರುಗಳಿಗೇ ಮೋಸವಾಗದಂತ ಮಾರ್ಕೆಟ್ ಇಟ್ಟಿದೆ. ನಂಬಿದ್ರೆ ನಂಬಿ, ಈಗ್ಲೂ, ನಾಲ್ಕೈದು ಕಡೆ ಓಡ್ತಾಯ್ದೆ. ನೆನ್ನೆ ತಾನೇ ಮಗದೊಮ್ಮೆ ಚಿತ್ರ ನೋಡಿದ ನನಗೆ, ಅಲ್ಲಿಯ TURNOVER ಆಶ್ಚರ್ಯಗೊಳಿಸಿತು. HOUSEFULL ಆಗ್ದಿದ್ರೂ,ಕಳೆದ ವಾರ ನೋಡಿದ 'ಚಿನ್ನದ ತಾರೆ'ಯ 'ವಿವಾಹ ಗೃಹ'ಕ್ಕೆ ಬಂದಿದ್ದ ಜನಕ್ಕಿಂತ ಜಾಸ್ತಿ ಇದ್ರು ಅನ್ನೋದು ಅತಿಶಯೋಕ್ತಿಯಲ್ಲವೇಯಲ್ಲ. ನನ್ನ ಮುಂದಿನ ಸಾಲುಗಳಲ್ಲಿ ಚಿತ್ರದ ಬಗ್ಗೆ ನನಗನ್ನಿಸಿದುದನ್ನು ಮುಂದಿಡ್ತಿನಿ. ಓದಿ. ನಿಮ್ಗು ಅದೇ ಅನ್ಸಿದ್ರೆ ನಾನು ಧನ್ಯ.

- 1995ರಲ್ಲಿ ಜನರ ಮುಂದೆ ಈ ಚಿತ್ರ ಬಂದಾಗ, ಜನರಿಗ ಈ ಚಿತ್ರದಿಂದ ಸಿಕ್ಕಿದ್ದು ABSOLUTE ಹೊಸತನ. ಚಿತ್ರರಂಗದ ಆ ಟೈಮ್ನಲ್ಲಿ 'ಎಂದೂ ಕಂಡು ಕೇಳರಿಯದ ಚಿತ್ರ '.

- ಇಲ್ಲಿಯ ತನಕ ಬಂದಿರುವ ಎಲ್ಲಾ ರೌಡಿಸಂ ಚಿತ್ರಗಳ ದೊಡ್ಡಪ್ಪ ಈ ಓಂ.

- ಚಿತ್ರ ನಿರೂಪಣೆಯಲ್ಲಿ 'ಉಪೇಂದ್ರತನವಿದೆ'. ಉದಾ: ಒಬ್ಬ ರೌಡಿ ಅವನ ವೈರಿಯನ್ನ ನೋಡಿ, 'CHASE' ಅಂತ ಫಿಲ್ಮಿ ಸ್ಟೈಲಲ್ಲಿ ಕಿರ್ಚ್ತಾನೆ. ಕ್ಯಾಮೆರ ಸಡನ್ನಾಗಿ ಚೇಸಿಂಗ್ ಸೀನಿಗ್ತಾನೆ ಹೋಗದು? ಇಲ್ಲಿ ಹೋಗಲ್ಲ. ಟೀವಿ ಸ್ಕ್ರೀನಿನತ್ತ ಹೋಗತ್ತೆ. ಮೋಟಾರ್ ರೇಸಿಂಗ್ ಬರ್ತಾಯ್ರತ್ತೆ. ಅಲ್ಲಿಂದ ಕ್ಯಾಮೆರ, ಚೇಸಿಂಗ್ ಸೀನಿಗೆ ಹೋಗತ್ತೆ. ಅದು ಕೊಡೋ ಎಫೆಕ್ಟ್ ಪ್ರೇಕ್ಷಕನಿಗೆ ಖುಷಿಯಾಗತ್ತೆ. ಆ ಕಾಲಕ್ಕೇ ಅದು ತುಂಬಾನೇ ಬ್ಯೂಟಿಫುಲ್.

- ಶಿವಣ್ಣನ ವೀಕ್ನೆಸ್ಸ್ ಗಳನ್ನು ಮರೆಮಾಚಿ, ಅವರ STREGNTHS ಗಳನ್ನೇ ಹೈಲೈಟ್ ಮಾಡಿರೋ ಅಂಥ ಚಿತ್ರ. ಕ್ರೆಡಿಟ್ಸ್ ಟು ಉಪೇಂದ್ರ.

- ಬ್ಯಾಗ್ರೌಂಡ್ ಸ್ಕೋರ್ ಚೆನ್ನಾಗಿದೆ. ಚಿತ್ರ ಸಂಗೀತ ಅದ್ಭುತ. ಈಗ್ಲೂ ಜನ ವಿಸಲ್ ಹೊಡಿತಿದ್ರು. ವಿಸಲ್ ಶಬ್ದ ಅಸೆಂಡಿಂಗ್ ಆರ್ಡರಲ್ಲಿ. ಬ್ರಹ್ಮಾನಂದ < ಮೆಹಬೂಬಾ < ಕಾಲೇಜ್ ಕುಮಾರ < ಓ ಗುಲಾಬಿಯೇ (ಅಣ್ಣವ್ರ ಸಾಂಗ್ ಗೇ ಜಾಸ್ತಿ ವಿಸಲ್ ಬಂದಿದ್ದು)

- ನಿಜವಾದ ರೌಡಿಗಳ ಕೈಲೇ ಅವರವರ ಪಾತ್ರ ಮಾಡ್ಸಿದ್ದು ಸೂಪರ್ ಡೂಪರ್ ಪಬ್ಲಿಸಿಟಿ ಗಿಮಿಕ್ - ತನ್ವೀರ್, ಜೇಡ್ರಳ್ಳಿ ಕೃಷ್ಣಪ್ಪ ಬೆಕ್ಕಿನ ಕಣ್ಣು ರಾಜೇಂದ್ರ etc.

- ಮತ್ತು, ಬಹು ಮುಖ್ಯವಾಗಿ ಚಿತ್ರಕಥೆ, ಅದರ ಪ್ಲಾಟ್ ಜನಕ್ಕೆ ಹಿಡಿಸಿತು. ಚಿತ್ರ ಗೆಲ್ತು, ಓಡ್ತು, ಓಡ್ತಾಯ್ದೆ. ನಂತರ ಸಾವಿರ ಓಂ ಗಳು ಬಂದ್ವು. ಆದರೆ ಓಂ ಗಿದ್ದ ಓಂಕಾರ ಬೇರೆ ಯಾವ್ದಕ್ಕೂ ಬರ್ಲಿಲ್ಲ ಬಿಡೀ.

ನೆರೆ-ಹೊರೆ

ಅದು ಬೆಂಗಳೂರು. ಅಲ್ಲಿರುವ ಲೆಕ್ಕವಿಲ್ಲದಷ್ಟು ಕ್ರಮ, ಅಕ್ರಮ, ಸಕ್ರಮ ಅಪಾರ್ಟ್ಮೆಂಟುಗಳಲ್ಲಿ ಅದೂ ಒಂದು. ಸುಮಾರು ಇನ್ನೂರು ಫ್ಲ್ಯಾಟುಗಳಿರಬಹುದು. ರಾಜು ಟಿಪ್ ಟಾಪ್ ಆಗಿ ರೆಡಿ ಆಗಿ ಬಂದು ಫ್ಲ್ಯಾಟೊಂದರ ಮುಂದೆ ನಿಲ್ತಾನೆ. ಅವನ ಬಳಿ ಇದ್ದ ಒಂದಿಷ್ಟು ಬೀಗಗಳಲ್ಲಿ ಬಾಗಿಲನ್ನು ತೆಗೆಯಲು ಪ್ರಯತ್ನಿಸುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ ಬೀಗ ತೆರೆಯುತ್ತೆ. ಎಂದಿಗಿಂತ ಇವತ್ತು ಬೇಗ ಸಿಗ್ತಲ್ಲಾ ಅಂತ ಒಳಗೆ ಖುಷಿಪಟ್ಟು ಫ್ಲ್ಯಾಟ್ ಒಳಹೊಕ್ತಾನೆ. ಹೌದು ಅವನ ವೃತ್ತಿಯೇ ಅದು.


ಪರರ ಸ್ವತ್ತು ಹೊಲಸು ಅನ್ನೋ ಗಾದೆ ಅವನಿಗಿಲ್ಲ. ಅವನಿಗೆ ಪರರ ಸ್ವತ್ತೇ ಪರಮಾನ್ನ. ಎಂದಿನಂತೆ ಈ ದಿನವೂ ಅವನ ಬ್ಯಾಗಿಗೆ ಸಿಕ್ಕಿದ್ದು ತುಂಬಿಸಲು ಅಣಿಯಾಗ್ತಾನೆ. ದೊಡ್ ದೊಡ್ ವಸ್ತುಗಳಿಗೆ ಕೈ ಹಾಕದೆ ಸಿಕ್ಕ ಸಿಕ್ಕ ವಾಚು, ಕೂಲಿಂಗ್ ಗ್ಲಾಸು, ಕ್ಯಾಮೆರಾ, ಚಿಲ್ಲರೆ ಹಣ, ಆಭರಣಗಳು, ಸೀರೆ ಇತ್ಯಾದಿ ಅವನ ಮಜಬೂತಾದ ಬ್ಯಾಗಿಗೆ ತುಂಬಿಸಿ ಮತ್ತೇನಾದ್ರೂ ಸಿಗತ್ತಾ ಅಂತ ನೋಡ್ತಿರ್ಬೇಕಾದ್ರೆ ಅವನು ಒಳಗಿನಿಂದ ಬೋಲ್ಟ್ ಹಾಕಿದ್ದ ಮನೆಯ ಕದವನ್ನ ಆಚೆಯಿಂದ ಯಾರೋ ತಟ್ತಾರೆ. ಇವನ ಎದೆ ಒಂದೇ ಬಾರಿಗೆ ಧಸಕ್ ಅನ್ನತ್ತೆ.


ಅವನ ಅನುಭವದಲ್ಲಿ ಈ ರೀತಿ ಆದದ್ದು ಇದೇ ಮೊದಲು. ಇಂತ ಪರಿಸ್ಥಿತಿಯಲ್ಲಿ ಏನು ಮಾಡ್ಬೇಕೆಂದು ತಿಳಿಯದೇ ಕುಗ್ಗಿಹೋಗ್ತಾನೆ. ಆಚೆಯಿಂದ ಬಡಿತ ಹೆಚ್ಚಾಗುತ್ತಲೇ ಇವನಿಗೆ ಅಪಾರ್ಟ್ಮೆಂಟ್ ಸೆಕುರಿಟಿಯ ಆಜಾನುಬಾಹು ದೇಹ ಕಣ್ಮುಂದೆ ಬರುತ್ತದೆ. ಮನೆಯವರು ಯಾರದರೂ ಇದ್ದರೆ, ಅವರನ್ನು ತಳ್ಳಿ ಓಡಿಹೋಗಬಹುದೇ, ಹಾಗೆ ಮಾಡಿದರೂ ಅಪಾರ್ಟ್ಮೆಂಟ್ ಗೇಟ್ ತನಕ ಹೋಗುವಷ್ಟರಲ್ಲಿ ಸೆಕುರಿಟಿಯವರಿಗೆ ಸುದ್ದಿ ಮುಟ್ಟದೇ ಇರುತ್ತದಯೇ , ಮುಂತಾದವು ಇವನ ಮನಸ್ಸಿನಲ್ಲಿರುವಂತೆಯೇ ಆಚೆಕಡೆ ಇದ್ದ ನಳಿನಾ ಆಂಟಿ ಮತ್ತೊಮ್ಮೆ ಬಾಗಿಲು ಬಡೀತಾಳೆ.


ನಳಿನಾ ಆಂಟಿ ಸೆಮಿ ಸಿಲ್ಕ್ ಸೀರೆಯುಟ್ಟು , ಮ್ಯಾಚಿಂಗ್ ಸ್ಲೀವ್ಲೆಸ್ಸ್ ಬ್ಲೌಸ್ ತೊಟ್ಟು, ಕೂದಲನ್ನು ಜಡೆಯೂ ಅಲ್ಲದ, ಜುಟ್ಟೂ ಅಲದ ನಾಟ್ ತರಹದ ಹೇರ್ ಸ್ಟೈಲೊಂದಿಗೆ ಹೈ ಹೀಳ್ಡ್ ಚಪ್ಪಲಿ ತೊಟ್ಟಿರುತ್ತಾಳೆ. ಅವಳು ತುಂಬಾ ಅರ್ಜೆಂಟ್ ಕೆಲಸದಲ್ಲಿರುವಂತೆ ಮತ್ತೊಂದು ಬಾರಿ ಬಾಗಿಲು ಬಡಿಯುತ್ತಾಳೆ , ಅದೇ ಲಾಸ್ಟ್ ಚ್ಯಾನ್ಸ್ ಎಂದು ಮನಸ್ಸಿನಲ್ಲಂದುಕೊಂಡು. ಇತ್ತ ರಾಜು ಭಂಡ ಧೈರ್ಯ ಮಾಡಿ ಬಾಗಿಲು ತೆರೆಯುತ್ತಾನೆ, ಅವನ ಹೆಗಲೇರಿಸಿಕೊಂಡಿದ್ದ ಬ್ಯಾಗನ್ನು ಬದಿಗಿಟ್ಟು. ಹೆಂಗಸನ್ನು ನೋಡಿ ಕೊಂಚ ಹಗುರಗೊಂಡರೂ ಅವಳೇ ಮನೆಯೊಡತಿಯಾಗಿದ್ದರೆ ಎಂಬ ಪ್ರಶ್ನೆ ಮನಸ್ಸಿಗೆ ಬರುವ ಹೊತ್ತಿಗೆ, ಅವಳು -


HELLO MISTER, ನಾನು ನಿಮ್ ಪಕ್ಕದ್ ಫ್ಲ್ಯಾಟಲ್ಲಿರೋದು. ACTUALLY ನಾನು ನಮ್ಮ ಸಂಘದ ಮೀಟಿಂಗೊಂದಕ್ಕೆ ಅರ್ಜೆಂಟ್ ಹೊರಡ್ಬೇಕು. ನನ್ ಹಸ್ಬೆಂಡ್ ಇನ್ ಒನ್ ಟು ಹಾರ್ಸ್ ನಲ್ಲಿ ಬರ್ತಾರೆ. ಬಂದ್ರೆ ಒಂದ್ಚೂರು ಈ ಕೀ ಕೊಡ್ತೀರಾ?
ರಾಜುವಿನ ಮನಸ್ಸು ಕಕ್ಕಾಬಿಕ್ಕಿಯಾಗತ್ತೆ. ಬಾಯಿಗೆ ಬೀಗ ಹಾಕ್ದಂಗ್ ಆದ್ರೂ, ಕಷ್ಟಪಟ್ಟು ಬಾಯಿ ಬಿಡ್ತಾನೆ - ಓಕೆ. ಶ್ಯೂರ್. ಐ ವಿಲ್ ಟೇಕ್ ಕೇರ್ ಅಂತಾನೆ...




ಬೆಂಗಳೂರಿನ ಮನೆ-ಫ್ಲ್ಯಾಟುಗಳಲ್ಲಿ ಅಕ್ಕ ಪಕ್ಕದ ಮನೆಯವರ ಈಗಿನ ಪರಿಸ್ಥಿತಿಯೇ ಈ ಬರವಣಿಗೆಗೆ  ಸ್ಫೂರ್ತಿ.
ಬೃಹತ್ ಬೆಂಗಳೂರು - ಸಂಕುಚಿತ ಮನಸ್ಸುಗಳು !!

ಬಣ್ಣದ ತೆವಲು - COLOR "BLIND"NESS...



ಟೈಟಲ್ಲೇ ಭಯಾನಕ ಹಾರ್ಷಾಗಿದೆ ಅಲ್ವೆ? ಏನ್ ಮಾಡೊದು !! ಯಾವನ್ ಜಗತ್ತೇ ಸರಿಯಿಲ್ಲ ಅಂತ ಬೈತಾ ಇರ್ತಾನೋ, ಅವ್ನು ತುಂಬಾ ದೊಡ್ಡವನು ಅಂತ ಅನ್ಸ್ಕೊತಾನಂತೆ. ನಾನು ದೊಡ್ ಮನುಷ್ಯ ಆಗ್ಬೇಕು ಅಂತಾನೇ ಈ ಟೈಟಲ್ ಇಟ್ಟಿರೋದು.

ಭ್ರಷ್ಟಾಚಾರದ ವಿರುದ್ಧ ನಡೆದ ಅಣ್ಣಾ ಆಂದೋಲನದಲ್ಲಿ, ನಮ್ಮ ದೇಶದ ಯೂತ್ ಪವರ್ ವರ್ಕ್ ಆಗಿದೆ ಅನ್ನೋದು ಎಲ್ಲರೂ ಒಪ್ಪುವ ವಿಷಯ. ಆದ್ರೆ ಇಷ್ಟ್ ದಿನ, ಅಂದ್ರೆ ಐ ಮೀನ್ ಅಣ್ಣಾ ಬರೋ ತನಕ ನಮ್ಮ ದೇಶದ ಯೂತ್ ಗೆ,ಏನ್ ಯೌವ್ವನ ಮೈಗೆ ಹತ್ತಿರ್ಲಿಲ್ಲ್ವಾ? ಹತ್ತಿತ್ತೋ, ಬತ್ತಿತ್ತೋ ಅವೆಲ್ಲಾ ಗೊತ್ತಿಲ್ಲ.. ಅಣ್ಣಾ ಮತ್ತು ದೇಶದ ಮಧ್ಯೆ ಇದ್ದ, ಭ್ರಷ್ಟಾಚಾರದ ವಿರುದ್ಧ ಕೂಗುವ ಸಮಾನ ಮನಸ್ಕತೆ ನಮ್ಮನ್ನು ಇವತ್ತು ಇಲಿಗೆ ತಂದ್ ನಿಲ್ಸಿದೆ.


OK. ಮತ್ತೆ, ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು ಕಣ್ರಪ್ಪ. ಏನ್ ಹಬ್ಬದ ಆದ್ಮೆಲೆ ವಿಷ್ ಮಾಡ್ತಾ ಇದಾನೆ ಅಂತ ಬೈಕೊಬೇಡಿ. I JUST WANTED TO SPEAK SOMETHING ABOUT THIS AND THUS USED THE STRATEGY OF WISHING YOU ALL. ಸ್ವಲ್ಪ ಕನ್ನಿಂಗ್ ನಾನು. OK, ತಲಾಹರಟೆಗಳನೆಲ್ಲಾ ಬದಿಗಿಟ್ಟು, ಟಾಪಿಕ್ ಗೆ ಬರೋಣ. ಬಾಲ್ ಗಂಗಾಧರ ತಿಲಕರು ಮಹತ್ತರ ಉದ್ದೇಶದಿಂದ ರೋಡ್ ರೋಡಲ್ಲೂ ಗಣಪನ್ನ ಪೂಜಿಸಿ ಅಂಥ್ಹೇಳಿದ್ರು. ಎಲ್ರೂ ಕೈ ಜೋಡ್ಸಿದ್ರು, ತಿಲಕರು ದೊಡ್ಡೋವ್ರಾದ್ರು. ಇವತ್ತಿಗೂ ಅವ್ರ ಹೆಸ್ರು ಉಳ್ಸೋಹಂಗೆ ನಮ್ ಜನ ಅದನ್ನ ನಡ್ಸ್ಕೊಂಡ್ ಬರ್ತಾ ಇದಾರೆ.

ಪ್ರಾಬ್ಲಮ್ ಇರೋದು ಇಲ್ಲೇ !!
ನಮ್ಗಳಿಗೆ ಅದೇನ್ ಅರ್ಥ ಆಗಲ್ವೋ ಎನೋಪ್ಪ.. ಎಲ್ಲಿ ನೊಡಿದ್ರೂ, ಬಣ್ಣದ ಗಣಪತಿ ವಿಗ್ರಹಗಳದ್ದೇ ಕಾರುಬಾರು. ಸುಮ್ನೆ ವಿಜಯ ಕರ್ನಾಟಕದಲ್ಲಿ ಬಂದ ಈ STATISTICS ಮೇಲೆ ಕಣ್ಣು ಹಾಯಿಸಿ. ಮೀಟ್ರು ಆಫ್ ಆಗತ್ತೆ.

"ರಾಜ್ಯದಲ್ಲಿ ಈ ಬಾರಿ 50 ರಿಂದ 70 ಲಕ್ಷ ಗಣಪನ ಮೂರ್ತಿಗಳು ನೀರಿನಲ್ಲಿ ಕರಗಲಿವೆ. ಇದರಲ್ಲಿ ಶೇ.80 ರಷ್ಟು ಬಣ್ಣದ ಗಣೇಶನದ್ದೇ ದರ್ಬಾರು. ಇದರಿಂದ 3 ಸಾವಿರಕ್ಕು ಹೆಚ್ಚು ಕೆರೆಗಳು ಮಲಿನಗೊಳ್ಳಲಿವೆ. ಸೇಂಟ್ ಜಾನ್ಸ್ ಆಸ್ಪತ್ರೆಯ ಡಾ.ವೆಂಕಟೇಶ್ ಅವರ ಪ್ರಕಾರ, ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಮೂತ್ರಪಿಂಡ ವೈಫಲ್ಯ, ಕರುಳು ಬೇನೆ, ಕ್ಯಾನ್ಸರ್, ಮೆದುಳು ರೋಗಗಳಿಗೆ ತುತ್ತಾಗಿದ್ದರೆ! 8 ವರ್ಷದೊಳಗಿನ ಚಿಣ್ಣರ ದೇಹಕ್ಕೆ ವಿಷ ಸೇರುತ್ತವೆ. "

ಇದನ್ನ ಓದಿದ್ಮೇಲೂ ನಾವ್ ಬಣ್ಣದ ಗಣಪನನ್ನೇ ತಂದು ಕೂರಸ್ತೀವಿ ಅಂದ್ರೆ, ನಮಗಿಂತ ದೊಡ್ಡ ದೇಶಭ್ರಷ್ಟರು, ಇದಕ್ಕಿಂತ ದೊಡ್ಡ್ SCAM ಯಾವ್ದೂ ಇಲ್ಲ ಬಿಡಿ. ಇನ್ ಕೆಲವರು," ಅಯ್ಯೋ ನಾವ್ ಬಕೀಟಲ್ಲೇ ಮುಳ್ಗುಸ್ಬಿಡ್ತೀವಿ. ನಾವ್ ಕೆರೆ ತಮ ಓಗದೇ ಇಲ್ಲ ಅಂತ ಸಮಜಾಯಿಷಿ ಕೊಡ್ತಾರೆ ". ಅದಕ್ಕೆ ನನ್ನ ಉತ್ತರ - "ವಿಗ್ರಹ ಕರಗಿದ ನೀರನ್ನು, ನಾವ್ ಹಾಕೋದು ಪಾಪ ಕಲ್ಪವೃಕ್ಷ ಎನಿಸಿಕೊಂಡ ತೆಂಗಿನ ಮರಕ್ಕೇ ಹೊರತು, ಮೋರಿಗಲ್ಲ. ನಮ್ ಜನಗಳಿಗೆ ವಿಗ್ರಹ ಕರಗಿಸಿದ ನೀರನ್ನ ಚರಂಡಿಗೆ ಹಾಕೊ ಧೈರ್ಯ ಎಲ್ಲಿಂದ ಬರತ್ತೆ ಬಿಡಿ (ನಮ್ ದೇಶದಲ್ಲಿ ಭಕ್ತಿಗಿಂತ, ಭಯ ಜಾಸ್ತಿ ಅಲ್ವೇ!! ). ತೆಂಗಿನ ಮರಕ್ಕೊ, ಏರಿಯಾದಲ್ಲಿರುವ ಅರಳಿ ಮರಕ್ಕೋ ಹಾಕ್ತೀವಿ. GROUND WATERನ ರೇಪ್ ಮಾಡ್ತೀವಿ( I MEAN ಕೆಡ್ಸ್ತೀವಿ. I WANTED TO USE A HARSH WORD - EXCUSE ME ).

ಇನ್ನು ನಮ್ ದೇಶಕ್ಕೆ LOKPAL BILL ದೊರಕಿಸಿಕೊಟ್ಟ ಯುವಜನತೆ, ಅವ್ರ್ಗಳ ಮನೆಯಲ್ಲಿ, ಕಾಲೋನಿಗಳಲ್ಲಿ ಮಣ್ಣಿನ ಗಣಪನನ್ನೇ ತರುವಂತೆ ಆ ವಿಘ್ನನಿವಾರಕನೇ ಬುದ್ಧಿ ಕೊಡ್ಲಿ. ಆ ಗಟ್ಟಿ ಬಣ್ ಬಣ್ಣದ್ ಗಣಪತಿಗಳನ್ನ ನೋಡ್ಬೆಕಾದ್ರೆ ಭಕ್ತಿನೇ ಬರಲ್ಲ, WHEN WE THINK OF THE AFTER EFFECTS. IT SHOULD NO HAPPEN LIKE THAT ಅಲ್ವಾ?? LETS BE MORE RESPONSIBLE AND SENSIBLE.

ಗಣೇಶ ಎಂಥ ಅದ್ಭುತ ಕ್ಯಾರೆಕ್ಟರ್ ಅಂದ್ರೆ, ಅವನ್ ತಾಯಿಗೆ ಪ್ರಸವ ವೇದನೆ ಕೊಡ್ಬಾರ್ದು ಅಂತ, ಪಾರ್ವತಿಯ ಬೆವರಿನಿಂದ ಜನಿಸಿದ ಮಹಾನುಭಾವ. ಅಂಥವನನ್ನ ನಾವು ಪೂಜೆ ನೆಪದಲ್ಲಿ ಪ್ರಕೃತಿ ಮಾತೆಗೆ ನೋವು ಕೊಡ್ತಾಯಿದ್ದೀವಿ. ಇದು ಎಷ್ಟರ ಮಟ್ಟಿಗೆ ಸರಿ !!

ಇನ್ನೂ ಬರಿತಾ ಹೋದರೆ ಪೇಜ್ ಗಟ್ಟಲೇ ಗೀಚಬಹುದು.

ಅಥವಾ ಒಂದು ಲೈನಲ್ಲೇ ಹೇಳ್ಬಹುದು ಅನ್ನೋದಾದ್ರೆ
-LET THE CELEBRATIONS BE COLORFUL.
NOT THE IDOL !!